ಪ್ರಾರಂಭ ಪದದ ಹುಡುಕು

(55) (11) (21) (2) (7) (0) (0) (0) (6) (0) (0) (6) (0) (0) ಅಂ (5) ಅಃ (0) (44) (0) (12) (2) (0) (3) (1) (14) (0) (0) (0) (0) (0) (0) (0) (23) (0) (21) (4) (57) (63) (0) (20) (6) (39) (2) (4) (0) (3) (35) (14) (0) (49) (2) (0)
ಕಂದಂಗಳ್ ಫಲವಾಗಿರೆ ಸುಂದರ ವೃತ್ತಂಗಳಕ್ಕರಂ ಚವುಪದಿ ಮ ತ್ತಂ ದಲ್ ಗೀತಿಕೆ ತಿವದಿಗ ಳಂದಂಬೆತ್ತೆಸೆಯೆ ಪೇೞ್ದೊಡದು ಚತ್ತಾಣಂ
--------------
ಶ್ರೀವಿಜಯ
ಕಂದಮುಮಮಳಿನ ವೃತ್ತಮು ಮೊಂದೊಂದೆಡೆಗೊಂ ಡು ಜಾತಿಜಾಣೆಸೆಯ ಬೆಡಂ ಗೊಂದಿವೞೊಳಮರೆ ಪೇೞಲ್ ಸುಂದರ ರೂಪಾ ಬೆದಂಡೆಗಬ್ಬಮದಕ್ಕುಂ
--------------
ಶ್ರೀವಿಜಯ
ಕಮಲಾಕರದೊಳ್ ಸಂಕೋ ಚಮನೞಲಂ ಚಕ್ರವಾಕದೊಳ್ ಮಾಡದು ನಿ ನ್ನ ಮುಖೇಂದುಬಿಂಬಮಿಂದುಗೆ ಸಮನೆಂಬುದು ಮಿಗೆ ವಿರುದ್ಧರೂಪಕಮಕ್ಕುಂ ವಿರುದ್ಧ ರೂಪಕಂ
--------------
ಶ್ರೀವಿಜಯ
ಕಮಳಂ ಲಲಿತಭ್ರೂವಿ ಭ್ರಮಮಂ ವಿಸ್ಮಿತವಿಲೋಲಲೋಚನಯುಗಮಂ ಸಮವಾಯಮಳ್ಳೊಡದು ನಿ ನ್ನ ಮೊಗಕ್ಕೆಣೆಯೆಂಬುದದ್ಭುತೋಪಮೆ ನಿಯತಂ ಅದ್ಭುತೋಪಮೆ
--------------
ಶ್ರೀವಿಜಯ
ಕಮಳಮಿದನ್ನೆಗಮೀ ನಿ ನ್ನ ಮುಖದೊಳೋರಂತೆ ಪೆಱದುಮಿದಱೊಳ್ ಸದೃಶಂ ಸಮವಾಯುಮುಳ್ಳೊಡೆಲ್ಲಂ ಸಮನಿಸುಗಂತೆಂಬುದನಿಯಮೋಪಮೆಯಕ್ಕುಂ ಅನಿಯಮೋಪಮೆ
--------------
ಶ್ರೀವಿಜಯ
ಕಮಳಮಿದು ನಿನ್ನ ಮುಖದಂ ತೆ ಮುಖಮುಮೀ ಕಮಳದಂತೆ ನಿಕ್ಕುವಮೆಂದಿಂ ತಮರ್ದಿರೆ ಪೇೞ್ವುದನೞಿಗು ತ್ತಮರನ್ಯೋನ್ಯೋಪಮಾನ ನಾಮಾಂಕಿತಮಂ ಅನ್ಯೋನ್ಯೋಪಮೆ
--------------
ಶ್ರೀವಿಜಯ
ಕಮಳವಿಮೋಹದಿನೀ ನಿ ನ್ನ ಮೊಗಕ್ಕೆ ಱಗುವುದು ತೊಱಿವುದಾ ಸರಸಿಜಮಂ ಭ್ರಮರಂ ವದನಮಿದಲ್ತೆಂ ದು ಮೋಹದಿಂದೆಂಬುದಿದುವೆ ಮೋಹೋಪಮಿತಂ ಮೋಹೋಪಮೆ
--------------
ಶ್ರೀವಿಜಯ
ಕರ ಚರಣ ಶರೀರ ಶಿರೋ ದರ ವದನಾದ್ಯವಯವಂಗಳಿವು ತಂತಮ್ಮೊಳ್ ದೊರೆಕೊಂಡೆಡೆಗಳೊಳೊಳವಾ ಗಿರೆಯುಂ ನರರೊರ್ವರೊರ್ವರಂ ಪೋಲದವೋಲ್
--------------
ಶ್ರೀವಿಜಯ
ಕರೆಕರೆದು ಮನೋಧೃತಿಯಂ ನೆರೆವಾಸೆಯೊಳಿರ್ದಳಲ್ಲದುೞಿದೊಡೆ ನಿನ್ನಾ ವಿರಹಾನಳನಾ ತಾಪದೆ ಕರಗುಗುಮಿನ್ನಾಕೆಗಿನಿಸು ಕರುಣಿಸು ಮನದೊಳ್ ಕರುಣಾ
--------------
ಶ್ರೀವಿಜಯ
ಕವಿಗಳುಮನಾದಿಲೋಕೋ ದ್ಭವರಪ್ಪುದಱಿಂದನಂತ ಗಣನಾನುಗತಂ ಸವಿಶೇಷೋಕ್ತಿಗಳುಮನಂ ತ ವಿಧಂಗಳನಂತ ಭೇದವದಱಿಂ ಮಾರ್ಗಂ
--------------
ಶ್ರೀವಿಜಯ
ಕವಿಭಾವಕೃತಾನೇಕ ಪ್ರವಿಭಾಗ ವಿವಿಕ್ತ ಸೂಕ್ತಮಾರ್ಗಂ ಕಾವ್ಯಂ ಸವಿಶೇಷ ಶಬ್ದರಚನಂ ವಿವಿಧಾರ್ಥವ್ಯಕ್ತಿ ವರ್ತಿತಾಲಂಕಾರಂ
--------------
ಶ್ರೀವಿಜಯ
ಕಸವರಮೆಂಬುದು ನೆಱಿ ಸೈ ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ ಕಸವೇಂ ಕಸವರಮೇನು ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ
--------------
ಶ್ರೀವಿಜಯ
ಕಾಣನೇಗೆಯ್ದುಂ ತನ್ನ ದೋಷಮಂ ಕಾಣದಂತೆಂದುಂ ಕಣ್ಗಲ್ ತಮ್ಮ ಕಾಡಿಗೆಯಂ ಪೂಣಿಗನಾದುದಱಿಂ ಪೆಱರಿಂ ಜಾಣರಿನೋದಿಸಿ ಪೇೞ್ವುದು ಕಬ್ಬಮಂ
--------------
ಶ್ರೀವಿಜಯ
ಕಾರಕದೋಷಮುಂ ವಚನದೋಷಮುಮಾ ಗುರುದೋಷಮುಂ ಲಘೂ ಚ್ಚಾರಿತ ಶಬ್ದದೋಷಮುಮದಂತೆ ಸಮುಚ್ಚಯಜಾತದೋಷಮುಂ ಭೂರಿ ವಿಕಲ್ಪದೋಷಮುಮದಿನ್ನವಧಾರಣದೋಷಮುಂ ವಿಶಂ ಕಾ ರಚಿತೋರು ದೋಷಮುಮನೀ ತೆಱದಿಂ ತೞಿಸಲ್ಗೆ ಪಂಡಿತರ್
--------------
ಶ್ರೀವಿಜಯ
ಕಾರಕಮಂ ಕ್ರಿಯೆಯುಮನಱೆ ದೋರಂತಿರೆ ಮುಂತಗುಳ್ಚಿ ಮುಕ್ತಕ ಪದದೊಳ್ ಸಾರಂ ಸಮಾಸಪದದು ಚ್ಚಾರಣೆಯಂ ನೀಳ್ದು ನಿಲೆ ತಗುಳ್ಚುಗೆ ಕೃತಿಯೊಳ್
--------------
ಶ್ರೀವಿಜಯ